‘ತರ್ಲೆ ನನ್ನ ಮಕ್ಕಳು’ಸಿಕ್ಕಿತ್ತು ಯು/ಎ
Posted date: 28 Wed, Oct 2015 – 11:10:43 AM

ಅಂತೂ ಇಂತೂ ‘ತರ್ಲೆ ನನ್ನ ಮಕ್ಕಳು’ ದೆಹಲಿಯ ಟ್ರಿಬ್ಯೂನಲ್ ಇಂದ ನಿಟ್ಟುಸಿರು ಬಿಟ್ಟುಕೊಂಡು ಬಂದಿದೆ. ಪ್ರದೇಶಿಕ ಸೆನ್ಸಾರ್ ಮಂಡಳಿ, ರಿವೈಸಿಂಗ್ ಕಮೀಟಿ ನೀಡಿದ ಕಟ್ಸ್ ಇಷ್ಟವಾಗದ ಕಾರಣ ‘ತರ್ಲೆ ನನ್ನ ಮಕ್ಕಳು’ ಟ್ರಿಬ್ಯೂನಲ್ ಮೊರೆ ಹೋಗಿದ್ದರು. ಈಗ ‘ಯು/ಎ’ ಅನುಮತಿ ಪತ್ರದಿಂದ ಸಂತೋಷಗೊಂಡಿದೆ ಚಿತ್ರತಂಡ.
 
ಗ್ರೀನ್ ಲೈನ್ ಟ್ರಾವೆಲ್ಸ್ ಸಚ್ಚಿದಾನಂದ ಹಾಗೂ ಸುರೇಶ್ ಕುಮಾರ್ ಅವರ ನಿರ್ಮಾಣದ, ರಾಕೇಶ್ ಅವರ ಚೊಚ್ಚಲ ನಿರ್ದೇಶನದ ಚಿತ್ರ ‘ತರ್ಲೆ ನನ್ ಮಕ್ಳು’ ಸಿನಿಮಾ ಯತಿರಾಜ್, ಅಂಜನ ದೇಶ್ಪಾಂಡೆ, ನಾಗಶೇಖರ್, ಶುಭ ಪೂಂಜಾ, ಸೌಜನ್ಯ ಅಭಿನಯದ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಅವರದು ಅತಿಥಿ ಪಾತ್ರ. ಐವರು ನಿರ್ದೇಶಕರು ಡಾಕ್ಟರ್ ವಿ ನಾಗೇಂದ್ರಪ್ರಸಾದ್, ಮಳವಳ್ಳಿ ಸಾಯಿಕೃಷ್ಣ, ಎ ಪಿ ಅರ್ಜುನ್, ಸುನಿ ಹಾಗೂ ವಿ ಮನೋಹರ್ ರಚಿಸಿರುವ ಹಾಡನ್ನು ಜಗ್ಗೇಶ್, ನೆನಪಿರಲಿ ಪ್ರೇಂಕುಮಾರ್, ಶ್ರೀನಗರ ಕಿಟ್ಟಿ ಹಾಗೂ ನಟ ನಿರ್ದೇಶಕ ಪ್ರೇಮ್ ಧ್ವನಿಗೂಡಿಸಿದ್ದಾರೆ.
ನಿರ್ದೇಶಕ ಪ್ರೇಮ್ ಅವರ ಶಿಷ್ಯ ರಾಕೇಶ್ ಸ್ವತಂತ್ರ ನಿರ್ದೇಶಕರಾಗಿ ಅನೇಕ ತರ್ಲೆಗಳನ್ನು ಒಂದು ಮನರಂಜನಾತ್ಮಕ ರೀತಿಯಲ್ಲಿ ಹೇಳಿದ್ದಾರೆ. ಈ ಚಿತ್ರದ ಮುಖಾಂತರ ಸೂರ್ಯವಂಶಿ ಡೀ ಜೆ ಅದವರು ಸಂಗೀತ ನಿರ್ದೇಶನಕ್ಕೆ ಆಗಮಿಸಿದ್ದಾರೆ. ಜೇರಾಲ್ಡ್ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಲಿದ್ದಾರೆ. ನಾಯಕಿ ಶುಭ ಪೂಂಜಾ ಅವರು ಈ ಚಿತ್ರಕ್ಕೆ ಒಂದು ಹಾಡನ್ನು ಹೇಳಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed